ಭಾಗ್ಯಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ರೆಡ್ಡಿ ಅವರು ನಿರ್ಮಿಸಿರುವ ‘ನಿತ್ಯ ಜೊತೆ ಸತ್ಯ ಚಿತ್ರ ಫ಼ೆಬ್ರವರಿಯಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಆಡಿಯೋ ಸೀಡಿ ಬಿಡುಗಡೆಯಾಗಿದ್ದು ಕೇಳುಗರ ಮನ ಗೆದ್ದಿದೆ.
ಆಂಧ್ರಪ್ರದೇಶದಿಂದ ಬಂದು ಕನ್ನಡ ಚಿತ್ರ ನಿರ್ಮಿಸಿರುವ ನಮಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀಸಾ.ರಾ.ಗೋವಿಂದು ಅವರು ಸೇರಿದಂತೆ ಅನೇಕರು ನೀಡಿರುವ ಸಹಕಾರಕ್ಕೆ ನಮ್ಮ ಧನ್ಯವಾದಗಳು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೩೨ದಿನಗಳ ಚಿತ್ರೀಕರಣ ನಡೆದಿದೆ. ಶ್ರೀನಾಗ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಲ್ಯಾಣ್ ಸಾಮಿ ಅವರ ಛಾಯಾಗ್ರಹಣವಿದೆ. ರಘುರಾಂ ಸಂಗೀತ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಮನೀಶ್ಬಾಬು, ತೇಜಸ್ವಿನಿ, ದೇವರಾಜ್, ದಿನೇಶ್, ನಿವಾಸ್, ಆಶಾ ಮುಂತಾದವರಿದ್ದಾರೆ.